ಸಾಮಾಜಿಕ

ಅಪ್ರಾಪ್ತ ಬಾಲಕಿ ಮದುವೆ: ಕಂಪ್ಲಿ ಶಾಸಕ ಭಾಗಿ ಆಗಿರುವ ಫೋಟೊಗಳು ವೈರಲ್ 

Views: 117

ಕನ್ನಡ ಕರಾವಳಿ ಸುದ್ದಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಸಿರಿವಾರ ಗ್ರಾಮದಲ್ಲಿ ಗ್ರಾಪಂ ಸದಸ್ಯೆ ತನ್ನ ಮಗಳಿಗೆ ಬಾಲ್ಯ ವಿವಾಹ ಮಾಡಿದ್ದು, ಪ್ರಕರಣ ದಾಖಲಾಗಿದೆ. ಬಾಲ್ಯ ವಿವಾಹಕ್ಕೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಹಾಜರಾಗಿದ್ದು ವಿಶೇಷ

ಬಾಲ್ಯ ವಿವಾಹ ಮಾಡಿರುವ ಬಾಲಕಿ ತಾಯಿ ದೇವಮ್ಮ, ಮದುವೆ ಆಗಿರುವ ಯುವಕ ಶ್ಯಾಮಣ್ಣ ಬಂಕಾಪೂರ, ವರನ ತಂದೆ ಫಕೀರಪ್ಪ ಬಂಕಾಪೂರ ವಿರುದ್ದ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಕನಕಗಿರಿ, ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ. ಕಳೆದ 21ರಂದು ಸಿರಿವಾರ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದಿತ್ತು. ಅಪ್ರಾಪ್ತ 17 ವರ್ಷ 7 ತಿಂಗಳ ಬಾಲಕಿ ಜತೆ ಶ್ಯಾಮಣ್ಣ ಬಂಕಾಪೂರ ಎಂಬುವರ ಮದುವೆ ಆಗಿತ್ತು. ಅಪ್ರಾ ಆಗಿತ್ತು. ಅಪ್ರಾಪ್ತ ಬಾಲಕಿ ಮದುವೆ ಆಗಿರುವ ಬಗ್ಗೆ ಹೀರಖೇಡ ಗ್ರಾಪಂ ಪಿಡಿಒ ಮಲ್ಲಿಕಾರ್ಜುನ ಅವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಮದುವೆಯಲ್ಲಿ ಕಂಪ್ಲಿ ಶಾಸಕ ಜೆ. ಎನ್.ಗಣೇಶ ಭಾಗಿ ಆಗಿರುವ ಫೋಟೊಗಳು ವೈರಲ್ ಆಗಿವೆ.ಬಳ್ಳಾರಿ ಜಿಲ್ಲೆಯ ಕಂಪ್ಲಿ ಶಾಸಕ ಗಣೇಶ  ಫೋಟೋಗಳು ವೈರಲ್ ಆಗಿವೆ. ಖುದ್ದು ಗ್ರಾಪಂ ಸದಸ್ಯನೇ ಮುಂದೆ ನಿಂತು ಮಾಡಿರುವ ಬಾಲ್ಯ ವಿವಾಹ ಇದಾಗಿದ್ದು, ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ.

ವಾಸ್ತವದಲ್ಲಿ ಬಾಲಕಿಗೆ 17.7 ವರ್ಷ ಇವೆ. ಆದರೆ, ಆಧಾರ್ ಕಾರ್ಡ್ ನಲ್ಲಿ 18 ವರ್ಷಕ್ಕೆ ಸರಿ ಹೊಂದುವಂತೆ ತಿದ್ದುಪಡಿ ಮಾಡಲಾಗಿದೆ. ಶಾಲಾ ದೃಢೀಕರಣ ಪ್ರಮಾಣ ಪತ್ರ ಪಡೆದ ನಂತರ ಅಧಿಕಾರಿಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಮೂವರ ವಿರುದ್ಧ ಬಾಲ್ಯ ವಿವಾಹ ಕಾಯ್ದೆ 2006 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಧಾರ್‌ಕಾರ್ಡ್ ತಿದ್ದುಪಡಿ: ಮದುವೆಗೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಸ್ಥಳೀಯರು 1098-ಮಕ್ಕಳ ಸಹಾಯ ವಾಣಿಗೆ ಕರೆ ಮಾಡಿ, ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮನೆಗೆ ತೆರಳಿ ಪರಿಶೀಲನೆ ಮಾಡಲಾಗಿ, ಆಧಾರ್ ಕಾರ್ಡ್ನಲ್ಲಿ ಸರಿಯಾದ ವಯಸ್ಸು ಇದ್ದಿದ್ದರಿಂದ ಸುಮ್ಮನಾಗಿದ್ದಾರೆ. ಆದರೆ, ಸಹಾಯವಾಣಿಗೆ ಮತ್ತೇ ಕೆರೆ ಬಂದಿದ್ದರಿಂದ ಅಧಿಕಾರಿಗಳು ಶಾಲಾ ದಾಖಲಾಗಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ವಿವಾಹಿತೆಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಗೊತ್ತಾಗಿದೆ. ಅಧಿಕಾರಿಗಳಿಗೆ ವಾಸ್ತವ ಗೊತ್ತಾದ ನಂತರವೂ ಪ್ರಕರಣ ದಾಖಲಿಸಿಕೊಳ್ಳಲು ಕನಕಗಿರಿ ಪೊಲೀಸರು ಸಾಕಷ್ಟು ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 

Related Articles

Back to top button